ಮಂಗಳವಾರ, ಸೆಪ್ಟೆಂಬರ್ 13, 2016

   ಬೋನ್ ಸಾಯ್ - ಕುಂಡದಲ್ಲೊಂದು ಮರ


Image result for bonsai images


ಬೋಧೀ ವೃಕ್ಷ ಬೌದ್ಧರಿಗೆ ಆರಾಧ್ಯ. ಪ್ರವಾಸಗಳಲ್ಲಿ ಅನುಕೂಲವಾಗಲೆಂದು ಬೌದ್ಧ ಧರ್ಮ ಗುರುಗಳು ಬೋಧಿ ವೃಕ್ಷವನ್ನು ಕುಂಡದಲ್ಲಿ ಬೆಳೆಸುತಿದ್ದರು. ಇದು ಮಂದುವರೆದು ಚೀನಾದಲ್ಲಿ ಕುಂಡದಲ್ಲಿ ಬೆಳೆಸುವ ಹವ್ಯಾಸ ಬೆಳೆಯಿತು. ಹೀಗೆ ಪ್ರಾರಂಭವಾದ  ಹವ್ಯಾಸ ಮುಂದೆ ಬೆಳೆದಿದ್ದು ಜಪಾನಿನಲ್ಲಿ, ೧೩ನೇ ಶತಮಾನದಲ್ಲಿ ಉತ್ತುಂಗಕ್ಕೇರಿದ ಈ ಹವ್ಯಾಸ ಈಗ ವಿಶ್ವವ್ಯಾಪಿ.ಬೋನ್ ಸಾಯ್ ಉತ್ತಮ ಹವ್ಯಾಸ ಆತ್ಮಸಂತೋಷಕ್ಕೊಂದು ಸಾಧನ. ಪರಿಸರದ ಬಗ್ಗೆ ಒಲವು ಇರುವವರು, ಮರ ಗಿಡ ಬೆಳೆಸಲು ಜಾಗದ ಅಭಾವ ಇರುವವರು ತಮ್ಮ ಕ್ರಿಯಾಶೀಲತೆಗೆ ಸವಾಲು ಹಾಕಿ ಈ ಹವ್ಯಾಸ ಬೆಳೆಸಿಕೊಳ್ಳಬಹುದು.

ಬೋನ್ ಸಾಯ್ ಗಾಗಿ ಸಸ್ಯವರ್ಗ ಆಯ್ಕೆ


ಎಲ್ಲಾ ಗಿಡಗಳನ್ನೂ ಕುಂಡದಲ್ಲಿ ಬೆಳೆಸಬಹುದಾದರೂ ಕೆಲವು ನಿರ್ದಿಷ್ಟ ಜಾತಿಯ ಗಿಡಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅಯಾ ಪರಿಸರಕ್ಕೆ ಹೊಂದಿಕೊಳ್ಳುವ ಮರಗಳ ಸಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಎಲೆ, ಹೂ, ಹಣ್ಣುಗಳು ಚಿಕ್ಕದಾಗಿರುವ ಗಿಡಗಳನ್ನೇ ಬೆಳೆಸಿದರೆ ನೋಡುಗರಿಗೆ ಅತ್ಯಾಕರ್ಷಕ ವಾಗಿ ಕಾಣುತ್ತದೆ.

ಪ್ರಚಲಿತದಲ್ಲಿರುವ ಶೈಲಿಗಳು


೧) ಸಾಂಪ್ರದಾಯಿಕ ನೇರ ಶೈಲಿ : 
Image result for images of bonsai styles
ಈ ರೀತಿಯ ಬೋನ್ ಸಾಯಗಳು ನೇರವಾದ ಚೂಪಾಗುತ್ತಿರುವ ಕಾಂಡವನ್ನು ಹೊಂದಿರುತ್ತದೆ. ವೇಲಿನ ಭಾಗ ಸಾಂದ್ರವಾಗಿ, ಮೇಲ್ಮುಖವಾದ ಟೊಂಗೆಗಳನ್ನು ಹೊಂದಿರುತ್ತದೆ. ಇವನ್ನು ಅಂಡಾಕಾರದ ಅಥವಾ ಚತುಭು೯ಜಾಕಾರದ ಬಟ್ಟಲುಗಳಲ್ಲಿ ಬೆಳೆಸುವುದು ಸಾಮಾನ್ಯ.

 ೨). ಅಸಾಂಪ್ರದಾಯಿಕ ನೇರ ಶೈಲಿ: 



http://shop.brusselsbonsai.com/images/informalUpright200x192.gif

೩) ಬಾಗಿದ ಶೈಲಿ: 

Image result for images of bonsai styles

ಈ ಪ್ರಕಾರದಲ್ಲಿ ಬುಡದಿಂದಲೇ ಒಂದು ದಿಕ್ಕಿಗೆ ವಾಲಿದ ಗಿಡ ಹಾಗೇ ಮಂದುವರೆದಿರುತ್ತದೆ. ಈ ಮಾದರಿ ಬೆಳಕಿನ ಅಭಾವದಿಂದ ಉಂಟಾದ ಬಾಗುವಿಕೆಯನ್ನು ಹೋಲುತ್ತದೆ. 


೪). ಗಾಳಿ ಬೀಸಿದಂತಿರುವ ಶೈಲಿ : 
Image result for images of bonsai styles

ಹೆಸರೇ ಹೇಳುವಂತೆ ಈ ಶೈಲಿಯಲ್ಲಿ ಬೆಳೆಸಿದ ಮರ ಬಿರುಗಾಳಿ ಬೀಸುತ್ತಿರುವುದನ್ನು ಚಿತ್ರಿಸುತ್ತದೆ. ಗಾಳಿ ಬಂದಾಗ ಒಂದೆಡೆ ವಾಲಿದ ಮರದಂತಿರುತ್ತದೆ. ಒಂದೆ ಕಡೆ ಟೊಂಗೆ ಇದ್ದು ಅದರ ವಿರುದ್ದ ದಿಕ್ಕಿನಲ್ಲಿ ಮರ ಬಾಗಿದ್ದರೆ ಇನ್ನಷ್ಟು ನೈಸರ್ಗಿಕ ವಾಗಿರುತ್ತದೆ.



೫) ಅಧ೯ ಮತ್ತು ಪೂರ್ಣ ಜಲಪಾತ ಶೈಲಿ : 


Image result for images of cascade bonsai styles Image result for images of cascade bonsai styles


ಸಾಮಾನ್ಯವಾಗಿ ಎತ್ತರದ ಕುಂಡಗಳಲ್ಲಿ ಬೆಳೆಸುವ ಈ ಶೈಲಿಯ ಗಿಡಗಳು ಧಾರಕದ ಪಕ್ಕಕ್ಕೆ ವಾಲಿ ಕೆಳಗಿಳಿದಿರುತ್ತದೆ. ಇದು ಪ್ರಪಾತದ ಅಂಚಿನಲ್ಲಿ ಜೋಲುತ್ತಿರುವ ಗಿಡಗಳನ್ನು ಹೋಲುತ್ತದೆ.

೬) ಗುಚ್ಛ ಮಾದರಿ : 

https://adamaskwhy.files.wordpress.com/2014/08/img_6228.jpg


ಈ ಮಾದರಿಯಲ್ಲಿ ಬೆಳೆಸಿದ ಗಿಡಗಳ ೧/೨ ಗಿಂತ ಹೆಚ್ಚು ಕಾಂಡದ ಭಾಗ ಬೋಳಾಗಿರುತ್ತದೆ. ಮೇಲ್ಸರಿದಂತೆ ಒಮ್ಮೆಲೇ ಅನೇಕ ಟೊಂಗೆಗಳು ಮೇಲ್ಮುಖವಾಗಿ ಬೆಳೆದಿರುತ್ತದೆ.


ಈ ಮೇಲಿನ ಶೈಲಿಗಳ ಜೊತೆಗೆ ಕಡ್ಡಿ ಬೋನ್ ಸಾಯ್, ಕುಬ್ಜಗಳು, ಕಾಂಡದಲ್ಲಿ ಬಿರುಕು ಪ್ರಚಲಿತದಲ್ಲಿರುವ ಇನ್ನಿತರ ಶೈಲಿಗಳಾಗಿವೆ.


ಆಕಾರ ಕೊಡುವುದು



ಗಿಡವನ್ನು ಬೆಳೆಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಗಿಡಕ್ಕೆ ಆಕಾರ ಕೊಡುವುದು. ಯಾವ ರೀತಿ ಆಕಾರ ಕೊಡಲಾಗಿದೆ ಎನ್ನುವುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಮೊದಲ ಬೆಳವಣಿಗೆ ಯಿಂದಲೇ ಕೆಲವು ಗಿಡಗಳು ತಮ್ಮ ಶೈಲಿಯನ್ನು ವ್ಯಕ್ತಪಡಿಸಿಬಿಡುತ್ತವೆ. ಅವನ್ನೇ ಮುಂದುವರೆಸಿ ಗಿಡಕ್ಕೆ ಇನ್ನೂ ಹೆಚ್ಚಿನ ಮೆರಗು ಕೊಡಲು ತಂತಿ ಸುತ್ತುವುದು, ಭಾರ ಕಟ್ಟುವುದು, ಎಳೆದು ಕಟ್ಟುವ ಕ್ರಿಯೆಗಳನ್ನು ಮಾಡಿ ಉತ್ತಮ ಮೌಲ್ಯದ ಬೋನ್ ಸಾಯ್ ನಿರ್ಮಾಣ ಸಾದ್ಯ. ಗಿಡ ತನಗೆ ಬೇಕಾದಂತೆ ಬೆಳೆಯುತ್ತದೆ. ಅದನ್ನು ನಿಯಂತ್ರಿಸಿ ನಮಗೆ ಬೇಕಾದಂತೆ ಬೆಳೆಸಲು ಚಾಟನಿ/ಸವರುವುದು ಮತ್ತು ವ್ಯವಸ್ತಿತಗೊಳಿಸುವುದು ಅತ್ಯಗತ್ಯ.


ಬೋನ್ ಸಾಯ್ ಕೇವಲ ಪುಸ್ತಕಗಳನ್ನು ಓದಿ ಕರಗತಗೊಳಿಸಿಕೊಳ್ಳುವ ಕಲೆಯಲ್ಲ. ಇದಕ್ಕೆ ಪ್ರಕೃತಿಯನ್ನು ವಿಶ್ಲೇಷಿಸುವ ಕಣ್ಣು ಮುಖ್ಯ. ಬೇರೆ ಬೇರೆ ಬೋನ್ ಸಾಯ್ ಗಳನ್ನು ನೋಡಿ, ತಾವೇ ಬೆಳೆದು ಈ ಕಲೆಯನ್ನು ಕರಗತಗೊಳಿಸಿಕೊಳ್ಳಬಹುದು. ದೊಡ್ಡ ಹೆಮ್ಮರವಾಗಿ ಬೆಳೆಯಬೇಕಿದ್ದ ಗಿಡವನ್ನು ಚಿಕ್ಕದಾಗಿ ಬೆಳೆಸುವುದೇ ಒಂದು ಅದ್ಬುತ. ಅದ್ಭುತವಾದ ಅದ್ಬುತವನ್ನು ನಿರ್ಮಿಸಲು ಕುಶಲತೆ ರೂಡಿಸಿಕೊಳ್ಳಬೇಕು. ಅದ್ದರಿಂದ ಇಂದೇ ಒಂದು ಬೋನ್ ಸಾಯ್ ಬೆಳೆಸಲು ಪಣತೊಡಿ.

ವಿ.ಸೂ.
೧.ಗೂಗಲ್ ನಲ್ಲಿ ಆಯ್ದುಕೊಂಡ ಚಿತ್ರ ಗಳನ್ನು ಉಪಯೋಗಿಸಿಕೊಳ್ಳಲಾಗಿದೆ.



ಭಾನುವಾರ, ಜನವರಿ 31, 2016

ಸಕಾರಾತ್ಮಕ ಯೋಚನೆಯಿಂದ ಕೃಷಿ ಉದ್ಯಮದ ಅಭಿವೃದ್ಧಿ : ತಂತ್ರಜ್ಞಾನ ಬಳಸಿಕೊಂಡರೆ ಬಯಸಿದ್ದೆಲ್ಲವೂ ಸಿದ್ಧಿ


ಒಬ್ಬರ ಮನೆಯಲ್ಲಿ ಪೂಜೆಗೆ ಹೋಗಿದ್ದೆ. ಸರಿ ಸುಮಾರು ೧೫೦ ಜನ ಸೇರಿದ್ದರು. ಇವರಲ್ಲಿ ಹೆಚ್ಚಿನವರು ಕೃಷಿಕರಾಗಿದ್ದರು.  ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ಹೆಣ್ಣು ಕೊಡದೇ ಇರುವದರಿಂದ ಹಿಡಿದು  ಕಾರ್ಮಿಕರ ಕೊರತೆ, ಬೆಳೆಗೆ ಯೋಗ್ಯ ಬೆಲೆ ಸಿಗದೇ ಇರುವುದು, ಕೃಷಿಯಲ್ಲಿ ಯವಕರಲ್ಲಿಯ ನಿರಾಸಕ್ತಿ ಹೀಗೆ  ಇನ್ನೆನು ರೈತರಿಗೆ ಭವಿಷ್ಯವೇ ಇಲ್ಲ ಎನ್ನುವಷ್ಟು  ಹಲವು ಸಮಸ್ಯೆಗಳ ಕುರಿತು ಚರ್ಚೆಗಳಾಗುತ್ತಿದ್ದವು. ರೈತರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಕೃಷಿಯಲ್ಲಿಯ ಋಣಾತ್ಮಕ ಅಂಶಗಳನ್ನೆ ತೋರಿಸಿ/ಬಿತ್ತರಿಸುವುದು ರೈತರಲ್ಲಿಯ ಇಂತಹ ಯೋಚನೆಗಳಿಗೆ ಕಾರಣವಾಗಿರಬಹುದು. ನಾವು ಹಲವು ದಶಕಗಳಿಂದಲೂ ಅನೇಕ ಲೇಖನಗಳಿಂದ, ದಿನಪತ್ರಿಕೆಗಳಲ್ಲಿ ಕೃಷಿಯಲ್ಲಿಯ ಸಮಸ್ಯೆಗಳನ್ನೇ ಚರ್ಚಿಸಿ,  ಎಲ್ಲರೂ ಕೃಷಿಯ ಬಗ್ಗೆ ಋಣಾತ್ಮಕ ಚಿಂತನೆಗೆ ಒಳಪಡುವಂತಾಗಿದ್ದು, ಸಮಸ್ಯೆಗಳು ಬಂಡೆಯಾಕಾರದ್ದಾಗಿದೆ ಎಂಬ ಭಾವನೆ ಬಂದಿದೆ. ಇದರಿಂದ ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಕೈ ಹಾಕುವಂತಾಗಿದೆ. ಕೃಷಿಯ ಉತ್ಪನ್ನಗಳಿಗೆ  ಯೋಗ್ಯ ಬೆಲೆ ಸಿಗದೇ ಇರುವುದು, ಯೋಗ್ಯ ಸಮಯದಲ್ಲಿ ಸಾಲ ಅಥವಾ ಬಂಡವಾಳದ ಕೊರತೆ, ಕಾರ್ಮಿಕರ ಕೊರತೆ, ನೀರಾವರಿ ಸೌಲಭ್ಯದ ಕೊರತೆ,  ಇವೆಲ್ಲ  ಕೃಷಿಯ ಹಿನ್ನಡೆಗೆ ಕಾರಣವೆಂದು ಹಲವು ದಶಕಗಳಿಂದ ಚರ್ಚೆಯ ವಿಷಯವಾಗಿದ್ದರೂ, ಇದರ ಶಾಶ್ವತ ಪರಿಹಾರಕ್ಕೆ ಯೋಚಿಸದೆ ಇರುವದು ಸಮಸ್ಯೆಗಳು ಇನ್ನೂ ಚರ್ಚೆಯ ವಿಷಯವಾಗೇ ಇರಲು ಕಾರಣವಾಗಿದೆ.ಸಾಲ ಮನ್ನಾದಂತಹ ಯೋಜನೆ ಕೇವಲ ರಾಜಕೀಯ ಲಾಭ ಹಾಗೂ ತಾತ್ಕಾಲಿಕ ಪರಿಹಾರ ಒದಗಿಸಬಹುದೇ ಹೊರತು ಶಾಶ್ವತ ಪರಿಹಾರವಾಗಲಾರದು. ಈ ಋಣಾತ್ಮಕ ಪ್ರಪಂಚದಲ್ಲಿ 60% ಜನರನ್ನು ಒಗ್ಗೂಡಿಸಿ ಸಕಾರಾತ್ಮಕ ಯೋಚನೆ ಮೂಡುವಂತೆ ಮಾಡುವುದು ಒಂದು ಸವಾಲಾಗಬಹುದೇ ಹೊರತು ಸಮಸ್ಯೆಗಳಿಗೆ ಪರಿಹಾರ ಇಲ್ಲ ಅಂತಲ್ಲ.
ನಮ್ಮ ಇಂದಿನ  ಪಠ್ಯಪುಸ್ತಕಗಳಲ್ಲಿಯೇ ಕೃಷಿಯ ಬಗ್ಗೆ ಸಕಾರಾತ್ಮಕ ಅಂಶಗಳ ಕೊರತೆ ಇದೆ. ಕೃಷಿ ಮಳೆ ಜೊತೆಯಲ್ಲಿನ ಜೂಜಾಟ,  ರೈತರು ಬಡವರು, ಅನಕ್ಷರಸ್ಥರು, ಸಾಲದ ವಿಷವರ್ತುಲದಲ್ಲಿ ಸಿಲುಕಿರುವವರು ಎನ್ನುವುದನ್ನೇ ಬಿಂಬಿಸುವದು ಯುವಕರು ಕ್ರಷಿಯಲ್ಲಿ ಆಸಕ್ತಿ ಕಳೆದುಕೊಳ್ಳಲು ಪ್ರಮುಖ ಕಾರಣ. ವಾಸ್ತವದಲ್ಲಿ ಇಂದಿಗೂ ಕೃಷಿ 60ಕ್ಕಿಂತಲೂ ಅಧಿಕ ಜನರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಯಾವುದೇ ಸರ್ಟಿಫಿಕೇಟ್, ಡಿಗ್ರಿ ಇಲ್ಲದವರಿಗೂ ಜೀವನಪೂರ್ತಿ ಉದ್ಯೋಗ ನೀಡಿ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿರುವ ಎಕೈಕ ವೃತ್ತಿ ಎಂದರೆ ಅದು ಕೃಷಿ ಮಾತ್ರ.

ಕೃಷಿ ಕೂಡ ಒಂದು ಉದ್ಯಮ:

ಮನೆ ಬಾಡಿಗೆಗೆ ಕೊಡಿಸುವುದು, ಜಾಗ ಕೊಡಿಸುವುದು ಹೀಗೆ ಎಲ್ಲವೂ  ಉದ್ಯಮವಾಗಿರುವ ಈ ದಿನಗಳಲ್ಲಿ ರೈತರು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ. ಆರ್ಥಿಕವಾಗಿ ಲಾಭದಾಯಕವಾದ ಕೆಲಸಗಳನ್ನು ಮಾತ್ರ ಮಾಡುವದರಿಂದ ಉತ್ಪಾದನಾ ವೆಚ್ಚ ಕಡಿಮೆಮಾಡಿ ಅಧಿಕ ಲಾಭ ಗಳಿಸಬಹುದು. ಇದಕ್ಕೆ ರೈತರಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಪ್ರತಿ ಹಳ್ಳಿಯಲ್ಲಿ ಸರಕಾರಿ ಶಾಲೆ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳಗಳಲ್ಲಿ ರೈತರಿಗೆ ಆರ್ಥಿಕ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಪ್ರತಿ ರೈತರಲ್ಲಿಯು ಉದ್ಯಮಶೀಲತೆ ಬೆಳೆಸಬಹುದಾಗಿದೆ. ಪ್ರತಿ ರೂಪಾಯಿ ವೆಚ್ಚಕ್ಕೆ ರೂಪಾಯಿಗಿಂತಲೂ ಅಧಿಕ ಇಳುವರಿ/ಆದಾಯ ಬಂದಾಗ ಮಾತ್ರ ಯಾವುದೇ ಉದ್ಯಮ ಲಾಭದಾಯಕವಾಗಬಹುದು.

ಸಹಕಾರ ಕೃಷಿ ಎಲ್ಲದಕ್ಕೂ ಪರಿಹಾರ:  

ಕರ್ನಾಟಕ ಹಾಲು ಒಕ್ಕೂಟ ಒಂದು ಸಹಕಾರಿ ಸಂಘ. ದಿನನಿತ್ಯ ಎಲ್ಲಾ ರೈತರಿಂದ ಹಾಲು ಸಂಗ್ರಹಿಸಿ, ಸಂಸ್ಕರಿಸಿ ಗ್ರಾಹಕರಿಗೆ ತಲುಪಿಸಿ ಒಂದು ಯಶಸ್ವಿ ಸಂಸ್ಥೆಯಾಗಿದೆ. ಶೀಘ್ರವಾಗಿ ಕೆಡುವ ಪದಾರ್ಥವಾದ ಹಾಲಿನಲ್ಲಿ ಇಂತಹ ಮಾರುಕಟ್ಟೆ ಸ್ಥಾಪಿಸಿರುವ ನಮಗೆ ಇತರ ಕೃಷಿ ಉತ್ಪನ್ನಗಳಲ್ಲೂ ಇಂತಹ ಸಂಸ್ಥೆ ಸ್ಥಾಪಿಸುವುದು ಕಷ್ಟವೇನಲ್ಲ. ಇದರಿಂದ ರೈತರಿಗೆ ಉತ್ತಮ ಧಾರಣೆ ದೊರೆಯುವದರ ಜೊತೆಗೆ ಗ್ರಾಹಕರಿಗೂ ಉತ್ತಮ ಬೆಲೆಯಲ್ಲಿ ಉತ್ಪನ್ನಗಳು ಸಿಗಲು ಸಹಕಾರಿಯಾಗಬಹುದು. ಯಂತ್ರಗಳ ಬಳಕೆ ಕಾರ್ಮಿಕರ ಸಮಸ್ಯೆಗೆ ಪರಿಹಾರವಾದರೂ ತುಂಡು ಹಿಡುವಳಿ ಯಂತ್ರಗಳ ಬಳಕೆಗೆ ಹಿನ್ನಡೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಪರಿಹಾರ ಸಹಕಾರ ಕೃಷಿ. ನಬಾರ್ಡ ಸಂಸ್ಥೆ ಹಾಗೂ ಸರಕಾರ ಸ್ವಸಹಾಯ ಸಂಘಗಳ ರಚನೆ ಹಾಗೂ ಈ ಸಂಘಗಳು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕುಗಳ ಮುಖಾಂತರ ಸಾಲ ಸೌಲಭ್ಯ ಒದಗಿಸುತ್ತವೆ. ಪ್ರತಿ ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳಿವೆ. ಎಲ್ಲಾ  ಸಂಘಗಳಿಗೂ ಬ್ಯಾಂಕುಗಳು ಸಾಲ ಸೌಲಬ್ಯ ಒದಗಿಸುತ್ತಿದ್ದರೂ ಸಂಘಗಳು ಆರ್ಥಿಕ ಚಟುವಟಿಕೆ ಯಲ್ಲಿ ತುಡಗಿಸಿಕೊಳ್ಳುವುದು ತುಂಬಾ ವಿರಳ. ಪ್ರತಿ ಹಳ್ಳಿಗಳಲ್ಲಿ ರೈತ ಸ್ವಸಹಾಯ ಸಂಘಗಳನ್ನು ರಚಿಸಿ ಸಂಘಗಳ ಹೆಸರಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು  ಖರೀದಿಸವುದರಿಂದ ಕೃಷಿ ಯಾಂತ್ರಿಕತೆ ಸಾಧ್ಯ. ಇದರಿಂದ ಸ್ವಸಹಾಯ ಸಂಘಗಳ ಆದಾಯವು ವೃದ್ಧಿಯಾಗಲು ಸಹಕಾರಿ ಹಾಗೂ ಕಾರ್ಮಿಕರ ಸಮಸ್ಯೆಗಳಿಗೂ ಪರಿಹಾರವಾಗಿದೆ. ರೈತ ಸಹಕಾರಿ ಸಂಘಗಳು ಒಗ್ಗೂಡಿ ಪರಸ್ಪರ ಸಹಕಾರದಿಂದ ಯಂತ್ರಗಳ ಕರೀದಿಸಿ ಯಾಂತ್ರಿಕ ಕೃಷಿ , ಉತ್ಪನ್ನವನ್ನು ಕೆಡೆದಂತೆ ಬಹಳ ದಿನ ಸಂಗ್ರಹಿಸಿ ಇಡಲು ಶೀತಲ ಘಟಕಗಳ ಸ್ಥಾಪನೆಯಂತಹ ಕೆಲಸಗಳಿಂದ  ಕೃಷಿಕರ ಹಲವು ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಇದರಿಂದ ರೈತರ ಉತ್ಪನ್ನಗಳು ಒಂದೇ ಸಮಯದಲ್ಲಿ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಬಹುದಲ್ಲದೇ ಬೆಲೆಯ ಸ್ಥಿರತೆ ಸಾಧ್ಯ.  ಇದಲ್ಲದೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ಉತ್ಪನ್ನಗಳನ್ನು ರಸ್ತೆಗೆ  ಎಸೆದು ಪ್ರತಿಬಟಿಸುವುದನ್ನು ತಡೆಯಬಹುದು. ಒಗ್ಗಟ್ಟಿನಿಂದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯಲು ಸಾಧ್ಯ. ಸಹಕಾರ ಕ್ಷೇತ್ರದಿಂದ ಇವೆಲ್ಲವೂ ಸಾಧ್ಯವಾಗುತ್ತದೆ.  ಸರಕಾರ ಸಹಕಾರಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಕೃಷಿ ಅಭಿವೃದ್ಧಿ ಸಾಧ್ಯವಿದೆ.

ಕೃಷಿ ಪದವೀಧರರು ಕೃಷಿಯಲ್ಲಿ ತೊಡಗಿಕೊಂಡಾಗ ಇನ್ನಷ್ಟು ಅಭಿವೃದ್ಧಿ:

ನಮ್ಮ ಮಕ್ಕಳು ದೊಡ್ಡವರಾದ ಮೇಲೆ ಇಂಜಿನಿಯರ್ ಆಗಬೇಕು, ಒಳ್ಳೆಯ ಹುದ್ದೆ ಪಡೆದು ಕೈತಂಬ ಸಂಪಾದಿಸಬೇಕೆಂದು ಎಲ್ಲಾ ಷೋಷಕರು ಆಸೆ ಪಡುತ್ತಾರೆ. ಈತರಹದ ಯೋಚನೆಗಳಿಂದ ಎಲ್ಲರೂ ನೌಕರಿಗಾಗಿ ಮಾತ್ರ ಓದುವಂತಾಗಿದೆ. ಇದು ಕೃಷಿ ಕ್ಷೇತ್ರದಲ್ಲೂ ಬಿನ್ನವಾಗಿಲ್ಲ. ಕೃಷಿ ವಿಶ್ವವಿದ್ಯಾನಿಲಯಗಳು ಕೃಷಿ ಪದವಿದರರಲ್ಲಿ ಕೃಷಿಯೆಡೆಗೆ ಹೆಚ್ಚಿನ ಒಲವು ಮೂಡಿಸುವ ಅಗತ್ಯತೆ ಇದೆ. ಕೃಷಿಯಲ್ಲಿಯೇ ತೊಡಗಿಕೊಳ್ಳುವ ಕೃಷಿ ಪದವಿದರರಿಗೆ ವಿಶೇಷ ಅನುದಾನ, ಕಡಿಮೆ ಶುಲ್ಕ ಹೀಗೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವುದರಿಂದ ಹೆಚ್ಚಿನ ಕೃಷಿ ಪದವೀಧರರು ಕೃಷಿಯಲ್ಲಿ ತೊಡಗಿಕೊಳ್ಳಲು ಉತ್ತೇಜಿಸಬಹುದು. ಕೃಷಿಯಲ್ಲಿ ಕೌಶಲ್ಯ ಇರುವವರು ಕೃಷಿಯಲ್ಲಿ ತೊಡಗಿಕೊಳ್ಳುವಂತಾಗಿ ಹೆಚ್ಚಿನ ಇಳುವರಿ ಪಡೆಯುವಂತಾಗುವುದಲ್ಲದೆ ದೇಶದ ಪ್ರಗತಿಗೆ ಸಹಕಾರಿ ಆಗುವುದು.

ಪರಸ್ಪರ ಹೊಂದಾಣಿಕೆ, ಸಹಕಾರ, ಸಕಾರಾತ್ಮಕ ಯೋಚನೆಗಳಿಂದ ಕೃಷಿಯಲ್ಲಿ ಅದ್ಬುಗಳನ್ನು ಸಾಧಿಸಬಹುದು